Sunday, 10 March 2013


                      ಕಣ್ಣಿನ ಹಳದಿ

ಪಶ್ಚಿಮಘಟ್ಟಗಳ ನಡುವೆ ಬಸ್ಸೊಂದು ತಂಪು ಗಾಳಿಯನ್ನು ಸೀಳಿಕೊಂಡು ಶರವೇಗದಲ್ಲಿ ಮುನ್ನುಗ್ಗುತ್ತಿತ್ತು.ಬಸ್ಸಿನೊಳಗಿದ್ದ ಕೆಲವರು ಆರಾಮಾಗಿ ನಿದ್ರಿಸುತ್ತಿದ್ದರು.ಕೆಲವರು ಪುಸ್ತಕಗಳನ್ನು ಓದುತ್ತಿದ್ದರು.ಇನ್ನು ಕೆಲವರು ಕಿಟಕಿಯಾಚೆಗಿನ ಸೌಂದರ್ಯವನ್ನು ಸವಿಯುತ್ತಿದ್ದರು.ಇವ್ಯಾವು ಗೋಜಿಗೆ ಸಿಲುಕದೇ ಬಸ್ ಡ್ರೈವರ್ ಬಸ್ ಚಾಲನೆ ಮಾಡುತ್ತಿದ್ದ.

   ಇದ್ದಕ್ಕಿದ್ದಂತೆ ಮುಸ್ಲಿಂ ದಂಡುಕೋರರು ಬಸ್ಸಿನೊಳಗೆ ನುಗ್ಗಿ ಸಿಕ್ಕಸಿಕ್ಕ ಮುಸ್ಲಿಮರನ್ನು ಕೊಚ್ಚಿಹಾಕುತ್ತಿದ್ದರು.ಬಸ್ಸಿನ ಕೊನೆಯ ಸೀಟಿನಲ್ಲಿ ಕುಳಿತಿದ್ದ  ಒಬ್ಬ ಮುಸ್ಲಿಮ್ ಪಕ್ಕದಲ್ಲೇ ಇದ್ದ ಹಿಂದೂ ಮಗುವಿಗೆ ತನ್ನ ಬಿಳಿ ಟೋಪಿಯನ್ನು ಹಾಕಿ ಕುಳಿತ.ಬಂದ ದಂಡುಕೋರರು ಈತನನ್ನು ಹಿಂದುವೆಂದು ತಿಳಿದು ಹತ್ಯೆಗೈದರು.ಟೋಪಿ ತೊಟ್ಟ ಮಗು ನಡುಗುತ್ತಾ ನೋಡುತ್ತಿತ್ತು
.
                                                                                
                                 ***************************************

ನೀನು ಮಗುವಾಗಿದ್ದಾಗ
ನಿನ್ನ ನಡೆ ಸರಿ ಇರಲೆಂದು
ನಿನ್ನ ಕೈ ಹಿಡಿದಿದ್ದೆ
ಮಗುವೇ......
ಬೆಳೆದು ಬೊಡ್ಡವನಾಗಿದ್ದೀಯಾ
ಈಗಲೂ ನಿನ್ನ ಕೈ ಹಿಡಿದಿದ್ದೇನೆ
ನನ್ನ ಹೃದಯದ ಮೇಲೆ
ನೀನಿಟ್ಟಿರುವ ಕಾಲನ್ನು......ತೆಗೆ.
                                                  



                                                                             -ಜಯಶಂಕರ್ ಬೆಳಗುಂಬ   

No comments:

Post a Comment