ಇದೀಗ ಕಳಚಿಟ್ಟಿದ್ದೇನೆ.
ಎಷ್ಟೊಂದು ಮುಖವಾಡ
ಚಣಕ್ಕೂಂದು ಪಾತ್ರ,
ನೋವಲ್ಲೂ ನಲಿವು
ದಾಕ್ಷಿಣ್ಯಕ್ಕಿದ್ದ ಗೆಲುವು
ಅಬ್ಬಬ್ಬಾ!
ಶಾಂತ ಮನಸಿನ ಕಲರವ
ಸದ್ದು!
ಶಾಂತತೆಯೇ ಪರಮ ವೈರಿ
ಹೇಸಿಗೆಯ ಮಾತು
ತೋರಿಕೆಗೆ ಸಹ್ಯ
ಪ್ರತಿಭಟನೆ ಹೃದಯದ
ಮಿಡಿವ ಸಹಕಾರ
ಛೇ!
ಕುಟಿಲರತೆಯ ಕುಕ್ಕುಲತೆ
ಉಕ್ಕಿಸಿದ ಬದುಕು
ಈಗ
ಒಳಗೆ ಹೊರಗೆ ವೈರುಧ್ಯವಿಲ್ಲ
ಸ್ಥಂಭೀಭೂತ ದೇಹ
ಚಲನ ಆತ್ಮಕೆ ಸ್ಪಂದಿಸದು
ನಿಶ್ಚಲ ಶ್ವಾಸ
ದೇಹವಳಿದ ವಿಶ್ವಾಸ
ಜೀವ ಬಿಡುಗಡೆಯ ದೇಹಕೆ
ಇಲ್ಲವೇ ಜೀವನ?
ಅಭಿಪ್ರಾಯ ಭಿನ್ನ
ಆದರೆ
ಮುಖವಾಡವಿಲ್ಲದ ಬದುಕು
ಕಾಯದು
ನಿರ್ಜೀವ ಕಾಯದ್ದು.
ಎಷ್ಟೊಂದು ಮುಖವಾಡ
ಚಣಕ್ಕೂಂದು ಪಾತ್ರ,
ನೋವಲ್ಲೂ ನಲಿವು
ದಾಕ್ಷಿಣ್ಯಕ್ಕಿದ್ದ ಗೆಲುವು
ಅಬ್ಬಬ್ಬಾ!
ಶಾಂತ ಮನಸಿನ ಕಲರವ
ಸದ್ದು!
ಶಾಂತತೆಯೇ ಪರಮ ವೈರಿ
ಹೇಸಿಗೆಯ ಮಾತು
ತೋರಿಕೆಗೆ ಸಹ್ಯ
ಪ್ರತಿಭಟನೆ ಹೃದಯದ
ಮಿಡಿವ ಸಹಕಾರ
ಛೇ!
ಕುಟಿಲರತೆಯ ಕುಕ್ಕುಲತೆ
ಉಕ್ಕಿಸಿದ ಬದುಕು
ಈಗ
ಒಳಗೆ ಹೊರಗೆ ವೈರುಧ್ಯವಿಲ್ಲ
ಸ್ಥಂಭೀಭೂತ ದೇಹ
ಚಲನ ಆತ್ಮಕೆ ಸ್ಪಂದಿಸದು
ನಿಶ್ಚಲ ಶ್ವಾಸ
ದೇಹವಳಿದ ವಿಶ್ವಾಸ
ಜೀವ ಬಿಡುಗಡೆಯ ದೇಹಕೆ
ಇಲ್ಲವೇ ಜೀವನ?
ಅಭಿಪ್ರಾಯ ಭಿನ್ನ
ಆದರೆ
ಮುಖವಾಡವಿಲ್ಲದ ಬದುಕು
ಕಾಯದು
ನಿರ್ಜೀವ ಕಾಯದ್ದು.
-ಶ್ರೀನಿವಾಸ್ ಡಿ. ಶೆಟ್ಟಿ

No comments:
Post a Comment